ಜಗತ್ತಿನ ದುಃಖ ನಿವಾರಣೆಗೆ ಬುದ್ಧ ಮಾರ್ಗವೆ ಪರಿಹಾರ-ಯುದ್ದವಲ್ಲ

ಅಯ್ಯೋ ಆ ದೇಶದ ಮೇಲೆ ಯುದ್ಧವಾದರೆ ನಮಗೇನು ಎಂದು ಗೋಣು ಹಾಕುತ್ತಿದ್ದೆವು, ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ಯುದ್ದ ಸಾರಿದ ಮೇಲೆ ಗೊತ್ತಾಯಿತು ನಮ್ಮ ಮೇಲು ಅಗಾಧವಾದ ಪರಿಣಾಮ ಬೀರುತ್ತದೆ ಎಂದು ತಿಳಿಯಿತು.

ಯುದ್ಧ ಎಂಬುದು ಸರ್ವಕಾಲಿಕ ವಿನಾಶದ ಒಂದು ಅಸ್ತ್ರ, ಪ್ರಬಲವಾಗಿರುವವನು ಜಗತ್ತನ್ನು ತನ್ನದಾಗಿಸಿಕೊಳ್ಳಬೇಕೆಂದು ಯುದ್ಧಕ್ಕೆ ಕತ್ತಿ, ಬಾಂಬುಗಳನ್ನು ಎತ್ತಿಕೊಳ್ಳುತ್ತಾನೆ, ಆತನಿಗೆ ಇಂತಹವುದೇ ದೇಶ, ಜನ ಬೇಕೆಂದಿಲ್ಲ, ಅವನಿಗೆ ಯುದ್ಧ ಮಾಡಲು ಒಂದು ದೇಶ ಅಥವಾ ಎದುರಾಳಿ ಬೇಕಷ್ಟೆ.

2550 ವರ್ಷಗಳ ಹಿಂದೆ ರಾಜನಾಗಿದ್ದ ಸಿದ್ದಾರ್ಥ ಮಾನವನ ಅತಿಯಾಸೆ, ದುಃಖಗಳಿಗೆ ಪರಿಹಾರ ಹುಡುಕಲು ತನ್ನ ರಾಜತನವನ್ನೇ ಬಿಟ್ಟು ಹೊರಟು ಆಸೆ ಎಂಬಬುದೇ ದು:ಖಕ್ಕೆ ಕಾರಣ ಎಂದು ಜಗತ್ತಿಗೆ ಹೇಳಿದ ಬುದ್ಧ ಮನುಷ್ಯ ತನ್ನ ಆಸೆಗಳನ್ನು ಕಡಿಮೆ ಮಾಡಿಕೊಳ್ಳಲು ಕರುಣೆ, ಮೈತ್ರಿ, ಅಗತ್ಯವೆಂದು ಸಾರಿದ.

ಯುದ್ದ ಎಂಬುದು ಮಾನವನ ವಿನಾಶಕ್ಕೆ ಆಗುವಂತಹವುದು, ಆದ್ದರಿಂದ ಜಗತ್ತಿನಲ್ಲಿ ಜೀವಿಸುವ ಸಕಲ ಪ್ರಾಣಿ, ಪಕ್ಷಿಗಳು ಶಾಂತಿಯನ್ನು ಬಯಸುತ್ತವೆಯೇ ಹೊರತು, ಯುದ್ದವನ್ನು ಎಂದೂ ಬಯಸುವುದಿಲ್ಲ. ಆದರೆ ಮಾನವ ಮಾತ್ರ ತನ್ನ ಪ್ರತಿಷ್ಠೆಗಾಗಿ ಯುದ್ದವನ್ನು ಮಾಡಲು ಬಯಸುತ್ತಾನೆ.

ಈಗ ಜಗತ್ತು ತುಂಬಾ ಸಂಕೀರ್ಣವಾಗಿದೆ, ಕ್ಷಣ ಮಾತ್ರದಲ್ಲಿ ಜಗತ್ತಿನಲ್ಲಿ ನಡೆಯುವ ವಿಷಯಗಳು ಮುಟ್ಟುತ್ತವೆ, ಹಾಗೆಯೇ ಮನುಷ್ಯನಿಗೆ ಲೋಭವೆಚ್ಚುತ್ತದೆ. ಈ ಲೋಭ ಹೆಚ್ಚಾದಾಗ ಕಣ್ಣು ಕಳೆದುಕೊಂಡು ಕುರುಡನಾದರೆ, ಕಿವಿ ಕಳೆದುಕೊಂಡು ಕಿವುಡನಾದರೆ ಜಗತ್ತಿನ ಯಾವ ಒಳಿತು ಆತನಿಗೆ ಬೇಕಾಗುವುದಿಲ್ಲ. ‘ನಾನೇ’ ಜಗತ್ತು ಎಂದು ಯುದ್ದಕ್ಕೆ ಹೊರಡುತ್ತಾನೆ.

ಯುದ್ದದಿಂದ ಮಾನವನ ಪ್ರಾಣಹಾನಿ, ಧನಹಾನಿ, ಮಾನವ ಸಂಪನ್ಮೂಲ, ನೀರು, ಗಾಳಿ ಸೇರಿದಂತೆ ಸಕಲೆಂಟು ನಾಶವಾಗುತ್ತವೆ. ಈ ನಾಶವನ್ನು ಬಯಸದ ಬುದ್ಧ ಜಗತ್ತಿನಲ್ಲಿ ಆಸೆ ಮತ್ತು ದುಃಖ ಎರಡನ್ನೂ ಹುಡುಕುತ್ತಾ ಹೊರಡುತ್ತಾನೆ. ಆಸೆಯನ್ನು ಕಡಿಮೆ ಮಾಡಿಕೊಂಡರೆ ದುಃಖವೂ ಕಡಿಮೆಯಾಗುತ್ತದೆ ಎಂಬ ಸತ್ಯವನ್ನು ಅರಿತು. ಜಗತ್ತಿನಲ್ಲಿ ಶಾಂತಿ ನೆಲಸಬೇಕಾದರೆ ಆಸೆಗಳಿಗೆ ಮಿತಿ ಮತ್ತು ಸರಳತೆ ಇರಬೇಕು ಎಂದು ಹೇಳುತ್ತಾನೆ.

2550 ವರ್ಷಗಳ ಹಿಂದೆಯೇ ಇದನ್ನು ಹೇಳಿದ ಬುದ್ಧ ಈಗ ಆತನ ಬುದ್ಧ ಮಾರ್ಗ ಜಗತ್ತಿಗೆ ಅಗತ್ಯವಾಗಿದೆ. ಈಗ ಜಗತ್ತು ಯುದ್ದವನ್ನು ಸಾರದೆ ಬುದ್ಧ ಮಾರ್ಗವನ್ನು ಸಾರಬೇಕಾದ ಅನಿವಾರ್ಯ ಮನುಷ್ಯನಿಗೆ ಅಗತ್ಯವಿದೆ. ಆಧುನಿಕ ಜಗತ್ತು ಬೆಳೆದಂತೆಲ್ಲಾ ಭೂಮಿಯೇ ಚಿಕ್ಕದಾಗಿ ಕಾಣಿಸುತ್ತಾ ಇದೆ.

ಇಂತಹ ಸಂದರ್ಭದಲ್ಲಿ ಅಣುವಸ್ತ್ರಗಳನ್ನು ಹೊಂದಿ ಜಗತ್ತನ್ನು ಗೆಲ್ಲಬಲ್ಲೆ ಎಂಬುದಕ್ಕಿಂತ ಬುದ್ಧನ ಕರುಣೆ, ಮೈತ್ರಿಯಿಂದ ಜಗತ್ತಿನಲ್ಲಿ ಶಾಂತಿ ನೆಲಸಲಿ ಎಂಬುದು ಈಗಿನ ಬುದ್ಧಜಯಂತಿಯ ಮಂತ್ರಘೋಷವಾಗಲಿ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *