ತುಮಕೂರು:ನಗರದ ರಸ್ತೆಗಳಲ್ಲಿ ಆಗಿರುವ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅವರುಗಳ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಾನಾ ಪ್ಯಾಲೇಸ್ನಿಂದ ಪಾಲಿಕೆ ಕಚೇರಿಯವರಗೆ ಪಾದಯಾತ್ರೆ ನಡೆಸಿ,ಮೇಯರ್,ಉಪಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ರಸ್ತೆಗಳನ್ನು ದುರಸ್ಥಿ ಮಾಡಿಸುವಂತೆ ಆಗ್ರಹಿಸಿದರು.
ನಗರದ ದಾನಾ ಪ್ಯಾಲೇಸ್ನಿಂದ ಹೊರಟ ಪಾದಯಾತ್ರೆ ಸದಾಶಿವನಗರ ಮುಖ್ಯರಸ್ತೆಯ ಮೂಲಕ ಇಸ್ರಾ ಶಾದಿಮಹಲ್, ಕುಣಿಗಲ್ ರಸ್ತೆಯ ಮೂಲಕ ಪಾಲಿಕೆ ಕಚೇರಿಯವರೆಗೆ ಸಾಗಿ ಮುಂದಿನ 15 ದಿನಗಳ ಒಳಗೆ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯ ಮನವಿ ಪತ್ರವನ್ನು ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಹಾಗೂ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾರವರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಮಾತನಾಡಿ,ತುಮಕೂರು ನಗರವನ್ನು ಸ್ಮಾರ್ಟ್ಸಿಟಿ ಎಂದು ಘೋಷಿಸಲಾಗಿದೆ.ಆದರೆ ನಗರದ ಕೆಲ ರಸ್ತೆಗಳನ್ನು ಹೊರತು ಪಡಿಸಿದರೆ ಬಹುತೇಕ ಬಡಾವಣೆಗಳ ಮುಖ್ಯರಸ್ತೆಗಳು ಹಾಗೂ ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ನಗರದ ಸದಾಶಿವನಗರ, ಮೆಳೇಕೋಟೆ ಮುಖ್ಯರಸ್ತೆ, ಕುಣಿಗಲ್ ಮುಖ್ಯರಸ್ತೆ, ಕೊಡಿ ಬಸವೇಶ್ವರ ದೇವಸ್ಥಾನ ಎದುರುಗಡೆ ರಸ್ತೆ, ಮಂಡಿಪೇಟೆ ರಸ್ತೆ, ಶೆಟ್ಟಿಹಳ್ಳಿ ಗೇಟ್ನಿಂದ ಜಯನಗರ ರಸ್ತೆ ಸೇರಿದಂತೆ ಬಹುತೇಕ ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಕೂಲಿ ಕಾರ್ಮಿಕರು ವಾಸ ಮಾಡುತ್ತಿರುವ ಬಡಾವಣೆಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ.ಶಾಸಕರಾಗಲಿ, ಸಂಸದರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಂದಿನ 15 ದಿನಗಳಲ್ಲಿ ಪಾಲಿಕೆ ರಸ್ತೆ ರಿಪೇರಿಯ ಬಗ್ಗೆ ಸೂಕ್ತ ವ್ಯವಸ್ಥೆ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿದರು